ಕೋಝಿಕ್ಕೋಡ್: ತಿರುಕೇಶ ದೇಹದ ತ್ಯಾಜ್ಯ ಎಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ಹೇಳಿಕೆ ದುರದೃಷ್ಟಕರ ಎಂದು ಕೇರಳ ಮುಸ್ಲಿಂ ಜಮಾಅತ್ ಅಭಿಪ್ರಾಯ ಪಟ್ಟಿದೆ . ಕಾಂತಪುರಂ ಎಪಿ ಅಬೂಬಕ್ಕರ್ ಮುಸ್ಲಿಯಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೇರಳ ಮುಸ್ಲಿಂ ಜಮಾಅತ್ ಹೊರಡಿಸಿದ ಹೇಳಿಕೆಯಲ್ಲಿ ರಾಜಕೀಯ ಮುಖಂಡರು ಭಕ್ತರ ಮನಸ್ಸನ್ನು ನೋಯಿಸುವಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು,ವಿಶ್ವಾಸ-ಅವಿಶ್ವಾಸ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರಾಗಿದ್ದರೂ ಧಾರ್ಮಿಕ ವಿಚಾರದಲ್ಲಿ ರಾಜಕೀಯ ನಾಯಕರು ಮೂಗು ತೋರಿಸುವುದು ಖಂಡನೀಯ.ಪ್ರವಾದಿ ಕೇಶದ ಬಗ್ಗೆ ಮುಖ್ಯಮಂತ್ರಿಯ ಹೇಳಿಕೆ ವಿಶ್ವಾಸಿಗಳ ಮನಸ್ಸನ್ನು ನೋಯಿಸಿದೆ.ವಿಶ್ವಾಸಿಗಳ ಮನಸ್ಸನ್ನು ನೋಯಿಸುವ ಹೇಳಿಕೆಗಳು ಕ್ಷಮಿಸಲು ಅಸಾದ್ಯ ಎಂದು ಅಭಿಪ್ರಾಯಪಟ್ಟಿದೆ.
ಸಭೆಯನ್ನು ಸೈಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಲ್ ಉದ್ಘಾಟಿಸಿದರು.ಕೆ.ಪಿ.ಅಬೂಬಕ್ಕರ್ ಮೌಲವಿ ಪಟ್ಟುವಂ, ಪ್ರೊ: ಎ.ಕೆ. ಯುಸಿ ಅಬ್ದುಲ್ ಮಜೀದ್,ಅಬ್ದುರ್ರಹ್ಮಾನ್ ಫೈಝಿ, ಸೈಫುದ್ದೀನ್ ಹಾಜಿ ಮತ್ತು ಸಿಪಿ ಸೈದಲವೀ ಮಾಸ್ಟರ್ ಇತರರು ಇದ್ದರು.