Latest Posts

ಗದಗ ಮುಸ್ಲಿಂ ಯುವಕನ ಹತ್ಯೆ: 𝚂𝚈𝚂 ಹಾಸನ ಜಿಲ್ಲಾಸಮಿತಿ ಖಂಡನೆ.

ಗದಗ : ಗದಗ ಜಿಲ್ಲೆಯ ನರಗುಂದದಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಗೂಂಡಾ ಪಡೆ ಗಂಭೀರವಾಗಿ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಿ ಮತ್ತೊಬ್ಬರನ್ನು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಖಂಡನೀಯ. ಕೂಡಲೇ ಪೊಲೀಸ್ ಅಧಿಕಾರಿಗಳು ನೈಜ ಅಪರಾಧಿಗಳು ಹಾಗೂ ಅವರಿಗೆ ಪ್ರಚೋದನೆ ನೀಡುವವರನ್ನು ಬಂಧಿಸಬೇಕೆಂದು 𝚂𝚈𝚂 ಹಾಸನ ಜಿಲ್ಲಾ ಸಮಿತಿ ಒತ್ತಾಯಿಸಿದೆ. ಸಂಘ ಪರಿವಾರದ ಕಾರ್ಯಕರ್ತರ ದಾಳಿಯಿಂದಾಗಿ ನರಗುಂದದಲ್ಲಿ ಸಮೀರ್(18) ಮೃತಪಟ್ಟಿದ್ದು. ಸಂಶೀರ್(19) ಎಂಬಾತ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ದಿನಗಳಿಂದ ನರಗುಂದದಲ್ಲಿ ಸಂಘ ಪರಿವಾರದ ಮುಖಂಡರು ಹರಡುತ್ತಿದ್ದ ಅಶಾಂತಿ ವಾತಾವರಣ ಪ್ರಚೋದನೆಗಳಿಂದ ಪ್ರೇರಿತರಾಗಿ ಈ ಕೊಲೆ ನಡೆದಿದ್ದು. ಇದರ ಸಂಪೂರ್ಣ ಹೊಣೆಯನ್ನು ಪೊಲೀಸ್ ಇಲಾಖೆ ವಹಿಸಿಕೊಳ್ಳಬೇಕು ಎಂದು 𝚂𝚈𝚂 ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳು ಮತ್ತು ಅವರಿಗೆ ಪ್ರಚೋದನೆ ನೀಡಿದವರನ್ನು ಬಂದಿಸಲೇಬೇಕು. ಹಾಗು ಕರ್ತವ್ಯಲೋಪ ಎಸಗಿದ ಪೊಲೀಸರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಸಂತ್ರಸ್ತ ಕುಟುಂಬಕ್ಕೆ ಶೀಘ್ರವೇ ಪರಿಹಾರ ಮತ್ತು ನ್ಯಾಯ ದೊರಕಿಸಿಕೊಡಬೇಕು ಎಂದು ಜಿಲ್ಲಾ ಸಮಿತಿ ಖಂಡನೆಯ ಮೂಲಕ ಆಗ್ರಹಿಸಿದೆ.