ಸುರತ್ಕಲ್ : ಸಮಸ್ತ ಕೇರಳ ಜಂ ಇಯ್ಯತುಲ್ ಮುಅಲ್ಲಿಮೀನ್ ಸುರತ್ಕಲ್ ರೇಂಜ್ ಇದರ ಅದ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಆಯ್ಕೆಯಾಗಿದ್ದಾರೆ,
ಇತ್ತೀಚೆಗೆ ಅಲ್ ಮದ್ರಸತುಲ್ ಅಝೀಝಿಯ್ಯ ಚೊಕ್ಕಬೆಟ್ಟು ಸಭಾಂಗಣದಲ್ಲಿ ನಡೆದ ರೇಂಜ್ ನ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಸ್ ಎಂ ಅಬ್ದುಲ್ಲಾ ಕುಂಞಿ ಮಹಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ದ.ಕ. ಜಿಲ್ಲಾಧ್ಯಕ್ಷ, ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಉದ್ಘಾಟಿಸಿದರು. ಮುದರ್ರಿಬ್ ರಿಯಾಝ್ ರಹ್ಮಾನಿ ವಿಶೇಷ ತರಗತಿ ನಡೆಸಿದರು


ಸುರತ್ಕಲ್ ರೆಂಜ್ ಮೇನೇಜ್ಮೆಂಟ್ ಅಧ್ಯಕ್ಷ ಇಲ್ಯಾಸ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಹನೀಫ್ ಇಡ್ಯಾ, ಮುಹಮ್ಮದ್ ಇಂದಿರಾನಗರ, ಬಶೀರ್ ಚೊಕ್ಕಬೆಟ್ಟು, ಇಮ್ತಿಯಾಜ್ ಇಡ್ಯಾ, ರಝಾಕ್ ಅಝ್ ಹರಿ ಸಿರಾಜ್ ಫೈಝಿ, ದಾವೂದ್ ಹನೀಫಿ, ಉಪಸ್ಥಿತರಿದ್ದರು.
ಅದ್ಯಕ್ಷರಾಗಿ ಅಬ್ದುಲ್ಲಾ ದಾರಿಮಿ ಮುಲ್ಕಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮದನಿ, ನಾಸಿರ್ ಮುಸ್ಲಿಯಾರ್, ಪ್ರದಾನ ಕಾರ್ಯದರ್ಶಿಯಾಗಿ ಅಸೀಫ್ ಯಮಾನಿ, ಕಾರ್ಯದರ್ಶಿಗಳಾಗಿ ಮುಸ್ತಫಾ ಅಝ್ ಹರಿ, ಇಮ್ರಾನ್ ದಾರಿಮಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಬೊಳ್ಳೂರು, ಪರೀಕ್ಷಾ ಬೋರ್ಡು ಚೇರ್ಮೆನ್ ಆಗಿ ಅಬ್ದುಲ್ ರಝಾಕ್ ಮದನಿ,ವೈಸ್ಚೇರ್ಮೆನಾಗಿ ತ್ವಯ್ಯಿಬ್ ಫೈಝಿ, ಸಿದ್ದೀಕ್ ಮೌಲವಿ ಐ.ಟಿ. ಕೊಡಿನೇಟರ್ ಆಗಿ ಜಲೀಲ್ ಫೈಝಿ, ಎಸ್ಕೆಎಸ್ಬಿವಿ ಚೇರ್ಮೆನ್ ಆಗಿ ದಾವೂದ್ ದಾರಿಮಿ ವೈಸ್ ಚೇರ್ಮೆನ್ ರಿಯಾಝ್ ಆಯ್ಕೆಯಾದರು.

ಸಿರಾಜ್ ಫೈಝಿ ಸ್ವಾಗತಿಸಿ, ಅಸೀಫ್ ಯಾಮನಿ ವಂದಿಸಿದರು.
